ಹರಿಹರ ಹರಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜಗದ್ಗುರು ಶ್ರೀ ವಚನಾನಂದ ಮಹಾ ಸ್ವಾಮಿಗಳವರ ದಿವ್ಯಸಾನಿದ್ಯದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾದ್ಯಕ್ಷರಾದ ಶ್ರೀ ಜಿ ಪಿ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ವಿವಿಧ ಜಿಲ್ಲೆಯ ಜಿಲ್ಲಾಧ್ಯಕ್ಷರು ಹಾಗೂ ತಾಲ್ಲೂಕಾಧ್ಯಕ್ಷರ ಸಮ್ಮುಖದಲ್ಲಿ ಸಂಘಟನಾತ್ಮಕ ಸಭೆಯ ಯಶಸ್ವಿಯಾಗಿ ಜರುಗಿತು.
ಈ ಸಂಧರ್ಭದಲ್ಲಿ ಪ್ರಧಾನ ಧರ್ಮದರ್ಶಿ ಶ್ರೀ ಬಿ ಸಿ ಉಮಾಪತಿಯವರು,ಶ್ರೀ ಬಾವಿ ಬೆಟ್ಟಪ್ಪನವರು,ಶ್ರೀ ಬಸವರಾಜ್ ದಿಂಡೂರುರವರು ಹಾಗೂ ಶ್ರೀಪೀಠದ ಧರ್ಮದರ್ಶಿಗಳು,ಆಡಳಿತಾಧಿಕಾರಿ ಶ್ರೀ ಡಾ.ರಾಜಕುಮಾರ ಅವರು,ಸಮುದಾಯದ ಹಿರಿಯರು,ಮಹಿಳಾ ಘಟಕದವರು,ಯುವ ಘಟಕದವರು ಉಪಸ್ಥಿತರಿದ್ದರು.