email: [email protected] | phone: (08192) 222008 / 224914 | Sri Peetha: 94819 27666

ನಾಡಿನ ಅಕ್ಷರಯೋಗಿ.
ಉತ್ತರ ಕರ್ನಾಟಕದ ಶಿಕ್ಷಣ ದಾರಿದ್ರ್ಯವನ್ನು ತೊಲಗಿಸಿ ಶೈಕ್ಷಣಿಕ ಕ್ರಾಂತಿ ಮಾಡಿದ ಮಹಾನ್‌ಸುಧಾರಕ.
ಹೆಸರು ಅರಟಾಳ ರುದ್ರಗೌಡರು.

ಅರಟಾಳ ರುದ್ರಗೌಡರು ಧಾರವಾಡದಲ್ಲಿ ಕರ್ನಾಟಕ ಕಾಲೇಜು ಸ್ಥಾಪನೆ ಮಾಡಿದವರು. ಧಾರವಾಡ ಶಿಕ್ಷಣ ಕಾಶಿ ಎಂದು ಕರೆಸಿಕೊಳ್ಳುವಲ್ಲಿ ಅರಟಾಳ ರುದ್ರಗೌಡರ ಕೊಡುಗೆ ಅಪಾರವಾಗಿದೆ. ಅಷ್ಟೇ ಅಲ್ಲ ಉತ್ತರಕರ್ನಾಟಕ ಶಿಕ್ಷಣ ಸಂಸ್ಥೆಗಳ ಕೊರತೆಯಿಂದ ನಲುಗುತಿದ್ದಾಗ ಆ ಕೊರತೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಅರಟಾಳ ರುದ್ರಗೌಡರು. ಹೇಳಬೇಕೆಂದ್ರೆ ೧೯೧೦ರವರೆಗೆ ಉತ್ತರ ಕರ್ನಾಟಕದಲ್ಲಿ ಒಂದೇ ಒಂದು ಕಾಲೇಜು ಇರಲಿಲ್ಲ. ಇದನ್ನರಿತ ಅರಟಾಳ ರುದ್ರಗೌಡರು ಆಗಿನ ಬ್ರಿಟಿಷ್‌ಕಲೆಕ್ಟರುಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆಗ ಬ್ರಿಟಿಷ್‌ಕಲೆಕ್ಟರ್‌ಗಳು ಒಂದು ಷರತ್ತು ಹಾಕಿದ್ದರು. ಶಿಕ್ಷಣ ಸಂಸ್ಥೆ ಆರಂಭಿಸಲು ಮೂರು ಲಕ್ಷ ರೂಪಾಯಿ ಠೇವಣಿ ಇಡಬೇಕು ಅನ್ನೋದೆ ಆ ಷರತ್ತು. ಷರತ್ತನ್ನು ಸವಾಲಾಗಿ ಸ್ವೀಕರಿಸಿದ ಅರಟಾಳ ರುದ್ರಗೌಡರು ೧.೭೦ ಲಕ್ಷ ರೂಪಾಯಿ ಸಂಗ್ರಹಿಸಿ ಕಾಲೇಜನ್ನ ಆರಂಭ ಮಾಡಿದ್ದರು.
ಧಾರವಾಡದಲ್ಲಿ ಜೂನ್‌೨೦, ೧೯೧೭ರಲ್ಲಿ ಕರ್ನಾಟಕ ಕಾಲೇಜಿನ ಸ್ಥಾಪನೆ, ಉತ್ತರ ಕರ್ನಾಟಕದಲ್ಲಿ ಕರ್ನಾಟಕ ಸೆಂಟ್ರಲ್‌ಕೋಆಪರೇಟಿವ್ ಬ್ಯಾಂಕ್‌ಸ್ಥಾಪನೆ, ಬೆಳಗಾವಿಯಲ್ಲಿನ ಕೆ.ಎಲ್‌.ಇ ಸಂಸ್ಥೆ ಪ್ರಾರಂಭಕ್ಕೆ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿದರು. ಕೆ.ಎಲ್‌.ಇ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಗದಗಿನಲ್ಲಿ ತೋಂಟದಾರ್ಯ ಸಂಸ್ಕ್ರತ ಶಾಲೆ, 1883 ರಲ್ಲಿ ಧಾರವಾಡದಲ್ಲಿ ಲಿಂಗಾಯತ ಎಜುಕೇಶನ್ ಸಂಸ್ಥೆ, ಮಹಾರಾಷ್ಟ್ರದ ಕೋಲ್ಹಾಪುರ ಲಿಂಗಾಯತ ಎಜುಕೇಶನ್ ಸಂಸ್ಥೆ, ಮುಂಬೈನಲ್ಲಿ ಲಿಂಗಾಯತ ಮಠಕ್ಕೆ ನಿಧಿ ಸಂಗ್ರಹಣೆ, ಹಾವೇರಿಯ ಹಿರೆಕೇರೂರಿನಲ್ಲಿ ಇಂಗ್ಲಿಷ್ ಶಾಲೆ, ಬೆಳಗಾವಿಯ ಸರಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್‌ ತರಬೇತಿ ಕೆಂದ್ರ, ಹುಬ್ಬಳ್ಳಿಯಲ್ಲಿ ಲಿಂಗಾಯತ ವಿಲಾಸ ಮುದ್ರಣಾಲಯ, ಇವೆಲ್ಲವೂ ಅರಟಾಳ ರುದ್ರಗೌಡ್ರು ಕೊಡುಗೆಗಳಾಗಿವೆ.
ಇಂಥ ಶಿಕ್ಷಣ ಪ್ರೇಮಿ, ಶಿಕ್ಷಣ ಸುಧಾರಕ ಅರಟಾಳ ರುದ್ರಗೌಡರು ಜನಿಸಿದ್ದು ಮಾರ್ಚ್‌೨೨ ೧೮೫೧ರಲ್ಲಿ. ಹುಟ್ಟೂರು ಕುಂದಗೋಳ ತಾಲೂಕಿನ ಅರಟಾಳ ಗ್ರಾಮ.
ನಮ್ಮ ನಾಡಿಗೆ ಕೊಡುಗೆ ಕೊಟ್ಟ ಮಹನೀಯರನ್ನು ಸ್ಮರಿಸುವುದು ನಾಡಿನ ಎಲ್ಲ ಜನರ ಕರ್ತವ್ಯವೂ ಹೌದು.
ಜವಾಬ್ದಾರಿಯೂ ಹೌದು.

ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಕ್ಷೇತ್ರ ಹರಿಹರ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ಬಿ.ಎಲ್.ಸಂತೋಷಜೀ ಅವರನ್ನು ದೆಹಲಿಯಲ್ಲಿ ದಿನಾಂಕ 14-03-2021ರಂದು ಭೇಟಿಯಾಗಿ ಉಭಯಕುಶಲೋಪರಿ ಸಮಾಲೋಚನೆ ನಡೆಸಲಾಯಿತು. ಬಿ.ಎಲ್.ಸಂತೋಷಜೀ ಅವರು ರಾಷ್ಟ್ರೀಯತೆ ಬಗ್ಗೆ ಅಪಾರ ಪ್ರೀತಿ ಉಳ್ಳವರಾಗಿದ್ದಾರೆ. ಅವರನ್ನು ಪ್ರತಿ ಬಾರಿ ಭೇಟಿಯಾದಾಗಲೆಲ್ಲಾ ಒಂದೊಂದು ಹೊಸ ವಿಚಾರದ ಮಂಥನವಾಗುತ್ತದೆ. ಈ ಬಗ್ಗೆ ಅವರು ಹೊಂದಿರುವ ಆಳವಾದ ಜ್ಞಾನವನ್ನು ನಮಗೆ ತಿಳಿಯಪಡಿಸುತ್ತಾರೆ.  ದೇಶ ವಿದೇಶದ ವಿದ್ಯಮಾನಗಳ ಬಗ್ಗೆ ಅವರೊಂದು ಜ್ಞಾನಭಂಡಾರವಿದ್ದಂತೆ. ಅವರ ಬಳಿ ಮಾತನಾಡಿದಷ್ಟೂ ನಮ್ಮ ಜ್ಞಾನ ಹೆಚ್ಚುತ್ತದೆ. ಅವರೊಬ್ಬ ಅಪಾರ ಜ್ಞಾನವನ್ನು ಹೊಂದಿರುವ ತತ್ತ್ವಜ್ಞಾನಿಗಳಾಗಿದ್ದಾರೆ. ಅವರು ರಾಜ್ಯದ ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಂಡು ದೇಶದ ಬಗ್ಗೆ ಅಪಾರ ಚಿಂತನೆಯನ್ನು ಹೊಂದಿದ್ದು, ಸಮಗ್ರ ದೇಶ ಕಟ್ಟುವತ್ತ ಎಲೆ ಮರೆ ಕಾಯಿಯಂತೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಇಂತಹ ಜ್ಞಾನಿಯವರ ಜೊತೆಗೆ ಮಾತನಾಡಿದರೆ ಸಾಕು ನಮ್ಮ ಜ್ಞಾನಾರ್ಜನೆಯಾಗುತ್ತದೆ.  ಅವರೊಂದಿಗೆ ನಾವು ನಡೆಸಿದ ಮಾತುಕತೆ ವೇಳೆ ಹತ್ತು ಹಲವಾರು ವಿಚಾರಗಳನ್ನು ಹಂಚಿಕೊಂಡೆವು. ಅವರಿಂದ ರಾಷ್ಟ್ರದ ಬಗ್ಗೆ ಹಲವಾರು ವಿಷಯಗಳನ್ನು ತಿಳಿದುಕೊಂಡೆವು. ಇತ್ತೀಚಿನ ದಿನಗಳಲ್ಲಿ ನಾವು ಕೈಗೊಂಡಂತಹ ಕೆಳದಿಯ ಚೆನ್ನಮ್ಮ, ಬೆಳವಡಿ ಮಲ್ಲಮ್ಮ,ಕಿತ್ತೂರು ರಾಣಿ ಚೆನ್ನಮ್ಮ ಕಾರ್ಯಕ್ರಮಗಳ ಬಗ್ಗೆ ಅವರಿಗೆ ಮಾಹಿತಿಯನ್ನು ನೀಡಿದೆವು. ಇದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ, ಆಜಾದಿ ಕಾ ಅಮೃತ ಮಹೋತ

ದಿನಾಂಕ 14-03-2021ರಂದು ಉಪರಾಷ್ಟ್ರಪತಿ ಶ್ರೀ ವೆಂಕಯ್ಯನಾಯ್ಡು ಅವರನ್ನು ದೆಹಲಿಯ ಉಪರಾಷ್ಟ್ರಪತಿಯವರ ನಿವಾಸದಲ್ಲಿ ಭೇಟಿ ಆದೆವು.ಅವರ ಇಂದಿನ ಭೇಟಿ ಬಹಳ ಪ್ರಫುಲ್ಲದಾಯಕವಾಗಿತ್ತು. ನಮ್ಮನ್ನ ನೋಡಿದ ಕೂಡಲೇ ಅವರು ಬಹಳ ಖುಷಿ ಪಟ್ಟರು.ಕೆಲವು ವರ್ಷಗಳ ಹಿಂದೆ ಅವರನ್ನು ಬೇಟಿಯಾದ ಸಂಧರ್ಭವನ್ನು ಮತ್ತು ಕೆಲವು ದಿನಗಳ ಹಿಂದೆ ನಿಮ್ಮ ಜೊತೆ ಮಾತನಾಡಿರುವುದನ್ನು ಮೆಲುಕು ಹಾಕಿದರು.ನೀವು ಯೋಗ ಕ್ಷೇತ್ರದಲ್ಲಿ ಮಾಡಿರುವ ಸಾಧನೆಸಿದ್ಧಿ ಹಾಗೂ ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾಗಿದ್ದನ್ನು ಬಗ್ಗೆ ಕೇಳಿದ್ದೇನೆ.ತುಂಬಾ ಸಂತಸ ಅಂತ ಪ್ರೀತಿಯಿಂದ ಮಾತಾಡಿದರು. ಯೋಗ, ಆಧ್ಯಾತ್ಮದ ಬಗ್ಗೆ ಉಪರಾಷ್ಟ್ರಪತಿಗಳಿಗೆ ಅತೀವ ಜ್ಞಾನವಿದೆ. ಆ ಕುರಿತು ನಮ್ಮ ಜೊತೆ ವಿಸ್ತೃತವಾಗಿ ಚರ್ಚಿಸಿದರು. ಜೂನ್ ೨೧ಕ್ಕೆ ಜಗತ್ತಿನೆಲ್ಲೆಡೆ ಆಚರಿಸುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕುರಿತೂ ಮಾತನಾಡಿದರು. ನಮ್ಮೊಂದಿಗೆ ನವದೆಹಲಿ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ನಿರ್ದೇಶಕರಾದ ಶ್ರೀ ಡಾ.ಈಶ್ವರ ಬಸವರೆಡ್ಡಿ ಉಪಸ್ಥಿತರಿದ್ದರು.
ಉಪರಾಷ್ಟ್ರಪತಿ ಶ್ರೀ ವೆಂಕಯ್ಯನಾಯ್ಡು ಅವರು ಸರಳ- ಸಜ್ಜನರು. ರಾಜಕೀಯ ಮುತ್ಸದ್ಧಿಗಳು. ನಮ್ಮ ಪಕ್ಕದ ಆಂಧ್ರಪ್ರದೇಶದವರು. ಕನ್ನಡಿಗರನ್ನು ಕಂಡರೆ ಅಪಾರ ಪ್ರೀತಿ ಗೌರವ. ಅವರಿಗೆ ಹರಿಹರಾದಿ ಶರಣರು ಹೆಚ್ಚಿನ ಆರೋಗ್ಯ ಭಾಗ್ಯ ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ.

ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಕ್ಷೇತ್ರ ಹರಿಹರ.

Back to Top