ತುಂಗಾನದಿಗೆ ಬಾಗೀನ ಸಮರ್ಪಣೆ ನೆರವೇರಲಿದೆ. ದಿನಾಂಕ 30-08-2023 ಸಮಯ-ಬೆಳಗ್ಗೆ 10ಕ್ಕೆ ಸ್ಥಳ-ತುಂಗಾರತಿ ತಟ,
ಹರಿಹರ ಹರಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಯೋಗಸಿಂಹಾಸನಾಧೀಶ್ವರ,ಹರಪೀಠಾಧ್ಯಕ್ಷ,ಪಂಚಮಸಾಲಿ ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನಿಧ್ಯದಲ್ಲಿ ತುಂಗಾನದಿಗೆ ಬಾಗೀನ ಸಮರ್ಪಣೆ ನೆರವೇರಲಿದೆ. ದಿನಾಂಕ-ಅಗಷ್ಟ್ 30,2023 ಸಮಯ-ಬೆಳಗ್ಗೆ 10ಕ್ಕೆ ಸ್ಥಳ-ತುಂಗಾರತಿ ತಟ,ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ ಹಿಂಭಾಗ,ಹರಿಹರ.
ಆಯೋಜಕರು-ಮಹಿಳಾ ಘಟಕ,ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ,ಹರಿಹರ.
ಹಗರಿಬೊಮ್ಮನಹಳ್ಳಿ ಶಾಖಾಮಠದ ಪರಮಪೂಜ್ಯ ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರು
ಹಗರಿಬೊಮ್ಮನಹಳ್ಳಿ ಶಾಖಾಮಠದ ಪರಮಪೂಜ್ಯ ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರು ಲಿಂಗೈಕ್ಯರಾಗಿರುವುದು ಪಂಚಮಸಾಲಿ ಸಮುದಾಯದ ಸದ್ಭಕ್ತರಿಗೆ
ಅಪಾರ ನೋವುಂಟುಮಾಡಿದೆ.ಪೂಜ್ಯರು ಪೂಜೆ ಪುನಸ್ಕಾರ,ಸಂಸ್ಕಾರ ನೀಡುವ ಮೂಲಕ ಸಮಾಜ ಸೇವೆ ಮತ್ತು ಸಂಘಟನೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು.
ಪರಮಪೂಜ್ಯರ ಆತ್ಮಕ್ಕೆ ಶಾಂತಿ ದೊರೆಯಲೆಂದು ಹರ ಮಹಾದೇವನಲ್ಲಿ ಪ್ರಾರ್ಥಿಸೋಣ.
ಹರ ಜಾತ್ರಾ ಮಹೋತ್ಸವ
ಹರಿಹರ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜನವರಿ 14 ಮತ್ತು 15ರಂದು ನಡೆಯಲಿರುವ ಹರಜಾತ್ರಾ ಮಹೋತ್ಸವ-2023 ಪೋಸ್ಟರ್ ಅನಾವರಣಗೊಳಿಸಿದ ಬಿಜೆಪಿ ರಾಷ್ಟ್ರೀಯ ಅದ್ಯಕ್ಷರಾದ ಶ್ರೀ ಜೆ ಪಿ ನಡ್ಡಾಜೀಯವರು.ಈ ಸಂಧರ್ಭದಲ್ಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು,ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರು,ಸಚಿವರಾದ ಬೈರತಿ ಬಸವರಾಜ್ ಅವರು,ಸಂಸದ ಶ್ರೀ ಜಿ.ಎಂ.ಸಿದ್ದೇಶ್ವರ ಅವರು,ಶಾಸಕ ಶ್ರೀ ರೇಣುಕಾಚಾರ್ಯ ಅವರು,ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಜಿ.ಪಿ.ಪಾಟೀಲ್ ಅವರು ಹಾಗೂ ಶ್ರೀಪೀಠದ ಧರ್ಮದರ್ಶಿ ಶ್ರೀ ಚಂದ್ರಶೇಖರ ಪೂಜಾರ್ ಅವರು ಉಪಸ್ಥಿತರಿದ್ದರು.